ಟಿ. ಮರಿಯಪ್ಪ [೧೯೦೪-೧೯೬೪] ಮೈಸೂರು ರಾಜ್ಯ ದ ಹಣಕಾಸು ಸಚಿವರಾಗಿದ್ದರು. ೧೯೫೩ ರಲ್ಲಿ ಭಾರತ ಸರ್ಕಾರವು ರಚಿಸಿದ- "ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿದ್ದರು. ಇವರು ದೇಶದಲ್ಲಿ ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ವಂಚಿತ ಸಮುದಾಯಗಳ ಬಗ್ಗೆ ತನಿಖೆ ಮತ್ತು ಸಲಹೆ ನೀಡುತ್ತಿದ್ದರು. == ಆರಂಭಿಕ ಜೀವನ == ತಿಗಳಿ ಮರಿಯಪ್ಪಾ ಬಿ. ಎ., ಎಲ್. ಎಲ್. ಬಿ. (೧೯೦೪-೧೯೬೪) ಸ್ವಾತಂತ್ರ್ಯ ಹೋರಾಟಗಾರ ತಂದೆಯ ಹೆಸರುಃ- ತಿಗಳಿ ಮರಿಯಪ್ಪ ಮಿಸ್ತ್ರಿ. ತಾಯಿಯ ಹೆಸರುಃ- ಹೊಂಬಳಮ್ಮ. ಅಜ್ಜಿಯ ಹೆಸರುಃ- ತಿಗಳಿ ಮಾರಿ ಗೌಡ. ತಿಗಳಿಯು ಕೊಯಮತ್ತೂರು ಸಮೀಪದ ಒಂದು ಸಣ್ಣ ಹಳ್ಳಿಯಾಗಿದೆ. ತಿಗಳಿ ಮಾರಿ ಗೌಡ ಅವರು ಊಟಿಯ ಟೀ ಎಸ್ಟೇಟ್ ಒಂದರ ಕಾರ್ಮಿಕ ಗುತ್ತಿಗೆದಾರರಾಗಿದ್ದರು. ತಿಗಳಿ ಮಾರಿ ಗೌಡರು ಚಹಾ ಎಸ್ಟೇಟ್ಗಳಿಗೆ ಕಂಬಳಿಗಳನ್ನು ಪೂರೈಸುವ ಗುತ್ತಿಗೆದಾರರಾಗಿದ್ದರು. ಅವರು ಕಾರ್ಮಿಕರ ಹುಡುಕಾಟದಲ್ಲಿ ಮತ್ತು ಕಂಬಳಿಗಳ ಪೂರೈಕೆಗಾಗಿ ೧೯ ನೇ ಶತಮಾನದಲ್ಲಿ ಕಲ್ಲನಕೆರೆಗೆ ವಲಸೆ ಬಂದರು. ತಿಗಳಿ ಮರಿಯಪ್ಪನ ತಂದೆ ತಿಗಳಿ ಮರಿಯ ಮೇಸ್ತ್ರಿ ಎಂಬ ಹೆಸರಿನಿಂದ ಪರಿಚಿತರಾಗಿದ್ದರು. ತಿಗಳಿ ಮರಿಯಾ ಮೇಸ್ತ್ರಿ ತಮ್ಮ ತಂದೆ ತಿಗಳಿ ಮಾರಿ ಗೌಡ ಅವರ ವ್ಯವಹಾರವನ್ನು ಮುಂದುವರೆಸಿದರು. ತಿಗಳಿ ಮರಿಯಾ ಮೇಸ್ತ್ರಿ ಬ್ರಿಟಿಷರೊಂದಿಗಿನ ವ್ಯಾಪಾರ ಸಂಬಂಧದಿಂದಾಗಿ ತಮ್ಮ ಮೊದಲ ಮಗ ತಿಗಳಿ ಮರಿಯಪ್ಪನ ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ತಿಗಳಿ ಮರಿಯಪ್ಪ ಅವರು ೧೯೨೪ ರವರೆಗೆ ತಮ್ಮ ತಂದೆ ತಿಗಳಿ ಮರಿಯಾ ಮೇಸ್ತ್ರಿಯವರ ವ್ಯವಹಾರವನ್ನು ಮುಂದುವರೆಸಿದರು. == ಶಿಕ್ಷಣ == ೧೯೦೯-೧೯೨೦: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎ. ವಿ. ಶಾಲೆ, ನಾಗಮಂಗಲ. ೧೯೨೦-೧೯೨೪:- ಮಹಾರಾಜ ಕಾಲೇಜು ಮೈಸೂರು. ೧೯೨೪-೧೯೨೮:- ಕಾನೂನು ಕಾಲೇಜು ಪುಣೆ ಇವರು ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರ ಸಹಪಾಠಿಯಾಗಿದ್ದರು == ವೃತ್ತಿಜೀವನ == ೧೯೨೮-೧೯೪೭:- ಹೆಚ್.ಸಿ. ದಾಸಪ್ಪ ಅವರು ಪಂಡಿತ್ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂಪುಟದಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಮೈಸೂರಿನಲ್ಲಿ ಎಚ್‌ ಸಿ ದಾಸಪ್ಪ ಅವರ ಕಚೇರಿಯಲ್ಲಿ ಮರಿಯಪ್ಪನವರು ವಕೀಲರಾಗಿದ್ದರು. ೧೯೨೯-೧೮೪೭:- ಇವರು ಮೈಸೂರಿನ ಪ್ರತಿನಿಧಿ ಸಭೆ, ವಿಧಾನ ಪರಿಷತ್ತು ಮತ್ತು ಸಂವಿಧಾನ ಸಭೆಯ ನಾಯಕರಾಗಿದ್ದರು. ೧೯೪೭-೧೯೫೦:- ಕೆ ಸಿ ರೆಡ್ಡಿಯವರ ಸಂಪುಟದಲ್ಲಿ ಗೃಹ, ಮೈಸೂರು ರೈಲ್ವೆ, ಮೈಸೂರು ಸೇನೆಯ ಸಚಿವರಾಗಿದ್ದರು ೧೯೫೦-೧೯೫೨: ಗೃಹ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು. ೧೯೫೨-೧೯೫೭:-ಮೈಸೂರು ಸಿಟಿ ಉತ್ತರ ಶಾಸಕ. ೧೯೫೩-೧೯೫೫: ಇವರು ಭಾರತ ಸರ್ಕಾರದ ಹಿಂದುಳಿದ ವರ್ಗಗಳ ಕಾಕಾ ಕಾಲೇಲ್ಕರ್ ಆಯೋಗದ ವರದಿಯ ಸದಸ್ಯ ಮತ್ತು ಲೇಖಕರಾಗಿದ್ದರು. ೧೯೫೬-೧೯೫೭:-ಹೊಸ ಮೈಸೂರು ರಾಜ್ಯದಲ್ಲಿ ಹಣಕಾಸು ಸಚಿವರು ಆಗಿದ್ದರು (ಈಗ ಕರ್ನಾಟಕ) ೧೯೫೭-೧೯೬೨:- ಶಾಸಕ ನಾಗಮಂಗಲ, ಮಂಡ್ಯಾ ಜಿಲ್ಲೆ. ೧೯೫೭-೧೯೬೨:- ಹಣಕಾಸು ಮತ್ತು ರೇಷ್ಮೆ ಕೃಷಿ ಸಚಿವರು-ಶ್ರೀ. ಎಸ್. ನಿಜಾಲಿಂಗಪ್ಪ/ಶ್ರೀ. ಬಿ. ಡಿ. ಜಟ್ಟಿ. == ಇತರ ಹುದ್ದೆಗಳು == ೧೯೪೦-೧೯೪೭:- ಕೆ. ಆರ್. ಮಿಲ್ಸ್ ಮೈಸೂರು ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದರು. ೧೯೫೨-೧೯೫೫: ಅಂಚೆ ಮತ್ತು ಟೆಲಿಗ್ರಾಫ್ ನೌಕರರ ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾಗಿದ್ದರು. ೧೯೫೫-೧೯೫೬:- ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಾಗಿದ್ದರು. ೧೯೫೫-೧೯೫೬:- ಎಚ್. ಎಂ. ಟಿ. ಯ ನಿರ್ದೇಶಕರಾಗಿದ್ದರು. ೧೯೬೨-೧೯೬೪:- ಹಿಂದೂಸ್ತಾನ್ ಫೋಟೋ ಫಿಲ್ಮ್ಸ್/ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯ ನಿರ್ದೇಶಕರಾಗಿದ್ದರು. ೧೯೬೩-೧೯೬೪:- ಬೆಂಗಳೂರಿನ MICOದ ಕಾನೂನು ಸಲಹೆಗಾರರು ಆಗಿದ್ದರು. == ನಿರ್ಣಾಯಕ ಸಮಸ್ಯೆಗಳು ಮತ್ತು ಘಟನೆಗಳು == ೧೯೪೮: ಡಾ. ಕೆ. ಎಂ. ಮುನ್ಶಿ ತಮ್ಮ ಆತ್ಮಚರಿತ್ರೆಯಲ್ಲಿ ಗೃಹ ಸಚಿವರಾಗಿ ಟಿ. ಮಾರಿಯಪ್ಪ ಅವರು ಹಿಂದೂ ಮುಸ್ಲಿಂ ಗಲಭೆಗಳನ್ನು ನಿಭಾಯಿಸಿದ್ದನ್ನು ಶ್ಲಾಘಿಸಿದ್ದಾರೆ. ೧೯೫೫: ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಲು ಭಾರತೀಯ ಜನರ ಬೆಂಬಲವನ್ನು ಪಡೆಯಲು ಭಾರತಕ್ಕೆ ಬಂದಿದ್ದ ಬ್ರಿಟಿಷ್ ಗಯಾನಾ ಸರ್ಕಾರ ಅಂದಿನ ಮುಖ್ಯಮಂತ್ರಿ ಶ್ರೀ ಚೆಡ್ಡಿ ಜಗನ್ ಅವರ ಭೇಟಿಯನ್ನು ಆಯೋಜಿಸುವಲ್ಲಿ ಟಿ. ಎಂ. ಮರಿಯಪ್ಪ ಅವರ ಪಾತ್ರವನ್ನು ಬ್ರಿಟಿಷ್ ಗಯಾನಾ ಸರ್ಕಾರವು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ದಾಖಲಿಸಿದೆ. == ಮೈಸೂರು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಟಿ. ಮಾರಿಯಪ್ಪ ಅವರ ಪಾತ್ರಕ್ಕೆ ಮನ್ನಣೆ == ೧೯೯೫: ಮೈಸೂರು ವಿಶ್ವವಿದ್ಯಾಲಯವು ನಾರಾಯಣಪ್ಪ ಅವರಿಗೆ ಅವರ ಪ್ರಬಂಧದ ಮೇಲೆ ಇತಿಹಾಸದಲ್ಲಿ ಉಪನ್ಯಾಸ ನೀಡಲು ಪಿಎಚ್ಡಿ ನೀಡಿತು. " -. (1904–1964)” == ಉಲ್ಲೇಖಗಳು ==